Saturday 3 October 2015

"ಜೈ ಜವಾನ್ ಜೈ ಕಿಸಾನ್" - ಲಾಲ್ ಬಹಾದ್ದೂರ್ ಶಾಸ್ತ್ರಿ.

"ಜೈ ಜವಾನ್ ಜೈ ಕಿಸಾನ್" - ಲಾಲ್ ಬಹಾದ್ದೂರ್ ಶಾಸ್ತ್ರಿ.
ಹೀಗೆ ಬದುಕಿದ್ದರು ನಮ್ಮ ಶಾಸ್ತ್ರೀಜಿ.
(ತಪ್ಪದೆ ಈ ಸಂದೇಶ ಶೇರ್ ಮಾಡಿ)
ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು.
ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.
ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”
“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!
“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ,ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಶಾಸ್ತ್ರೀಜಿ ಮಾತನಾಡುತ್ತಾರೆ..
“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”
ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.
ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.
“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.
ಶಾಸ್ತ್ರೀಜಿಯವರ ಮಕ್ಕಳಿಗೆ ಇಂಗ್ಲೀಷ್ ಹೇಳಿಕೊಡಲೆಂದು ಟ್ಯೂಟರ್ ಬರುತ್ತಿದ್ದರು.ಅವರನ್ನೂ ಕೆಲಸದಿಂದ ವಿಮುಕ್ತಗೊಳಿಸಿದರು.”ಮಕ್ಕಳು ಇಂಗ್ಲೀಷಿನಲ್ಲಿ ಫೇಲಾಗುತ್ತಾರೆ”ಟ್ಯೂಟರ್ ಹೇಳಿದ್ದಕ್ಕೆ ಶಾಸ್ತ್ರೀಜಿ,”ಆಗಲಿ ಬಿಡಿ ಇಂಗ್ಲೀಷ್ ನಮ್ಮ ಭಾಷೆಯಲ್ಲ.ಇಂಗ್ಲಿಷರು ಹಿಂದಿಯನ್ನು ಬರೆದರೆ ಅವರೂ ಫೇಲಾಗುತ್ತಾರೆ”ಎಂದರು.
ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.
ನಾಳೆ ಅಕ್ಟೋಬರ್ ಎರಡು ಬರುತ್ತಿದೆ.ಶಾಸ್ತ್ರೀಜಿಯವರ ಜನ್ಮದಿನ.ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ,ಸಜ್ಜನ ಮಹಾಪುರುಷನನ್ನು ನಾವಂದು ಸ್ಮರಿಸಬೇಕಿದೆ.. Forward this guys be proud about shastriji

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ."



ಶಾಲೆಯಿಂದ ಮನೆಗೆ ಬಂದ ೪ ವರ್ಷದ ಮಗುವೊಂದು ಊಟ ನಿರಾಕರಿಸಿ ತೆಪ್ಪಗೆ ಕುಳಿತುಬಿಟ್ಟಿತ್ತು. ತಾಯಿ, ಅಜ್ಜಿ, ತಾತ ಯಾರ ಜುಲುಮೆಗೂ ಬಗ್ಗಲಿಲ್ಲ. ಮುದ್ದು ಮಾಡಿದರು, ಚಾಕಲೇಟ್-ಐಸ್ಕ್ರೀಮ್ ನ ಆಮಿಷ ಒಡ್ಡಿದರು, ಗದರಿದರು, ಬುದ್ಧಿ ಹೇಳಿದರು-ಏನೇ ಮಾಡಿದರೂ ಒಂದು ತುತ್ತಿಗೂ ಬಾಯಿ ಬಿಡಲಿಲ್ಲ. ರಾತ್ರಿ ಆಫೀಸಿನಿಂದ ಮರಳಿ ಬಂದ ತಂದೆಗೆ ವರದಿ ಹೋಯಿತು. ಗಾಬರಿಗೊಂಡ ತಂದೆ ಎಲ್ಲ ಕೆಲಸವನ್ನೂ ಬಿಟ್ಟು ಮಗನನ್ನು ತೊಡೆಯ ಮೇಲೆತ್ತಿಕೊಂಡು ಊಟ ಮಾಡದಿರುವುದಕ್ಕೆ ಕಾರಣ ಕೇಳಿದ.
"ನಾನು ಕೇಳಿದ್ದನ್ನು ಒಪ್ಪಿಕೊಂಡರೆ ತಿನ್ನುವೆ."-ಎಂದಿತು ಮಗು.
"ಆಯ್ತು, ನಿನಗೇನು ಬೇಕು ಹೇಳು. ಕೈಲಾದಲ್ಲಿ ಕೊಡಿಸುವೆ. ತೀರ ದುಬಾರಿಯದ್ದು ಕೇಳಿದರೆ ಕೊಡಿಸಲಾರೆ." ಎಂದ ಅಪ್ಪ ಪಟ್ಟು ಬಿಡದೆ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.
ಮಗು ಹೇಳಿತು-"ನೀನು ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆ ಬೋಳಿಸಬೇಕು."
"ಇದೆಂಥ ವಿಲಕ್ಷಣ ಆಸೆ!" ವಿಸ್ಮಿತನಾಗಿ ತಂದೆ ನುಡಿದ. "ಎಷ್ಟು ಅವಲಕ್ಷಣವಾಗಿ ಕಾಣುವೆ ನೀನು ಗೊತ್ತೇ? ಶಾಲೆಯಲ್ಲೂ ಹುಡುಗರು ನಿನ್ನನ್ನು ನೋಡಿ ನಗುವರು."
"ನೀನು ಪ್ರಾಮಿಸ್ ಮಾಡಿದೀಯ"-ಮುಖ ಊದಿಸಿಕೊಂಡಿತು ಮಗು.
ಅಂತೂ ಇಂತೂ ಭರವಸೆಯನ್ನು ಈಡೇರಿಸದಿದ್ದರೆ ಮಗುವಿಗೆ ತಪ್ಪು ಸಂದೇಶ ಕೊಟ್ಟಂತಾಗುವುದೆಂದು ತಂದೆ ಒಪ್ಪಿದ. ಮಗು ಊಟ ಮಾಡಿತು. ತಂದೆ ಮಗುವನ್ನು ಸೆಲೂನಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬಂದ.
ಮರುದಿನ ಬೋಡುತಲೆಯ, ಗುಂಡುಗುಂಡಾಗಿದ್ದ, ಮಗನ ಅರಳು ಕಣ್ಣುಗಳಲ್ಲಿ ಮಿಂಚುತ್ತಿದ್ದ ಸಂತಸವನ್ನು ಕಂಡು ಸಂಭ್ರಾಂತನಾದ. ಶಾಲೆಗೆ ಬಿಡುತ್ತಿದ್ದಂತೆ ಮಗು ಕಾರಿನಿಂದ ಇಳಿದು ತನ್ನಂತೆಯೇ ಬೋಡುತಲೆಯಿದ್ದ ಹೆಣ್ಣುಮಗುವಿನ ಕೈ ಹಿಡಿಯಲು ಓಡಿ ಹೋಯಿತು. ಎರಡು ಮಕ್ಕಳೂ ಜೋರಾಗಿ ಕೇಕೆ ಹಾಕಿ, ನಕ್ಕು ಕೈಹಿಡಿದು ಜೊತೆಯಾಗಿ ಶಾಲೆಯೊಳಕ್ಕೆ ಹೊರಟು ಹೋದವು.ಇನ್ನೊಂದು ಮಗುವಿನ ತಾಯಿ ಈತನಿದ್ದ ಕಡೆಗೆ ಬಂದು-" ಇಂಥ ಮಗುವನ್ನು ಪಡೆದ ನೀವು ಅದೃಷ್ಟಶಾಲಿ" ಎಂದು ಅಭಿನಂದಿಸಿದಳು.
ಅರೆಕ್ಷಣ ವಿಸ್ಮಿತನಾದ ಅವನಿಗೆ "ನನ್ನ ಮಗು ಕ್ಯಾನ್ಸರ್ ಪೀಡಿತೆ. ಕೀಮೋಥೆರಪಿ ಮತ್ತು ರೇಡಿಯೇಶನ್ ನಿಂದಾಗಿ ತಲೆ ಬೋಡಾಗಿದೆ. ಶಾಲೆಗೆ ಬರಲು ಮುಜುಗರ ಪಡುತ್ತಿದ್ದ ಅವಳನ್ನು ಸಂತೈಸಿ ನಿಮ್ಮ ಮಗು "ನಾನೂ ನಿನ್ನಂತೆಯೇ ಆಗುತ್ತೇನೆ, ನಿನಗೆ ಮುಜುಗರವಾಗದು" ಎಂದು ಹೇಳಿ ಕೊಟ್ಟ ಭಾಷೆ ಉಳಿಸಿಕೊಂಡು ಅವಳ ನೆಮ್ಮದಿಗೆ ಕಾರಣನಾಗಿದ್ದಾನೆ. ಇಷ್ಟು ಪುಟ್ಟ ಮಗು ಅವಳ ನೋವನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಅವನ ಮಾತನ್ನು ನಡೆಸಿಕೊಟ್ಟ ನೀವೆಷ್ಟು ವಿಶಾಲ ಹೃದಯಿಗಳು!" ಎಂದಳು.
ಹಿಂದಿನ ದಿನವಷ್ಟೇ ತೊಡೆಯ ಮೇಲೆ ಕೂರು ಹಠ ಮಾಡಿದ ಮಗು, ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಮೀರಿಸಿ ಆಕಾಶದೆತ್ತರ ಬೆಳೆದು ನಿಂತಂತೆ ಭಾಸವಾಯಿತು ಅವನಿಗೆ. ಕಣ್ಣುಗಳು ಆರ್ದ್ರವಾದವು.
ಬಾಲ್ಯವೊಂದು ನಂದನ. ಎಳೆಯ ಮನಸ್ಸುಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅವರು ನೋವಿಗೆ, ಅಸಹಾಯಕತೆಗೆ, ಸ್ನೇಹಕ್ಕೆ, ಪ್ರೀತಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ನಾವು ತೆರೆದುಕೊಳ್ಳಲಾರೆವು. ಅವರು ಕ್ಷಣಾರ್ಧದಲ್ಲಿ ಅಚ್ಚರಿ, ಅಗಾಧತೆಗಳನ್ನು ಸೃಷ್ಟಿಸಿಬಿಡಬಲ್ಲರು. ಅವರ ಮಾತುಗಳನ್ನು ಅಪಹಾಸ್ಯಕ್ಕೀಡು ಮಾಡಿಯೋ, ಹಗುರವಾಗಿಯೋ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನ ದಡ್ಡತನ ಮತ್ತೊಂದಿಲ್ಲ.
ಕೆಲಸದ ಒತ್ತಡಗಳಲ್ಲಿ ಮಕ್ಕಳನ್ನು ಮಾತನಾಡಿಸಲು ಹೊತ್ತಿಲ್ಲವೆಂದು ನಿರಾಕರಿಸುವವರೇ ಬಹಳ ಮಂದಿ. ತುಂಬ ಮಾತನಾಡಬೇಕಾದ ವಯಸ್ಸು ಅದು. ಕಿವಿಯಷ್ಟನ್ನೇ ಅಲ್ಲ, ಮನಸ್ಸು ಕೊಟ್ಟು ಆಲಿಸಬೇಕಾದದ್ದು ಹಿರಿಯರೆಲ್ಲರ ಆದ್ಯ ಕರ್ತವ್ಯ..
ನಿಮಗಿಷ್ಟವಾಗಿದ್ರೆ ಶೇರ್ ಮಾಡಿ 🙏
ಇತಿಹಾಸ ಮರೆತ ಜನನಾಯಕ ಶಾಸ್ತ್ರಿಜಿ....
ಕಾಂಗ್ರೆಸ್ಸಿನವರು ಇಂದೇನಾದರೂ ಅಸ್ತಿತ್ವದಲ್ಲಿದ್ದರೆ ಅದು ಶಾಸ್ತ್ರಿ, ಪಟೇಲ್, ಮೊರಾರ್ಜಿ ಅಂಥವರ ಹೆಸರಿನಿಂದಲೇ ಹೊರತು ಇಂದಿನವರ ಕುಖ್ಯಾತ ಆಡಳಿತದಿಂದಲ್ಲ......
"We would prefer to live in poverty for as long as necessary but we shall not allow our freedom to be subverted" ಎಂದಿದ್ದರು ಶಾಸ್ತ್ರಿ. ಆದರೆ ಇಂದಿನ ರಾಜಕಾರಣಿಗಳು ಇದಕ್ಕೆ ತದ್ವಿರುದ್ಧ. ತಮ್ಮ ಇಲಾಖೆಯ ಸಚಿವಾಲಯದಲ್ಲಿ ಇರುವ ಖಜಾನೆಯ ಹಣವನ್ನು ನುಂಗಿ ನೀರು ಕುಡಿಯುವ ಮತ್ತು ಕಾನೂನಿನ ಕೈಗೆ ಸಿಗದೆ ನುಣುಚಿಕೊಳ್ಳುವ ಮೇಧಾವಿ ರಾಜಕಾರಣಿಗಳ ದಂಡೇ ಇಂದಿನ ಭಾರತ ಘನ ಸರ್ಕಾರದ ಸಂಪತ್ತು. 1965ರ ಯುಧ್ಧದ ಪರಿಣಾಮದಿಂದ ಖಾಲಿಯಾಗಿದ್ದ ಖಜಾನೆಯನ್ನು ತುಂಬಲು ಮತ್ತು ದೇಶದ ಒಳಿತಿಗಾಗಿ ಒಂದು ಹೊತ್ತು ಉಪವಾಸ ಮಾಡಲು ಕರೆ ಕೊಟ್ಟ ಅಂದಿನ ಪ್ರಧಾನಿ ಒಂದೆಡೆಯಾದರೆ, ಇಂದು ಇಡಿ ರಾಷ್ಟ್ರದ ಖಜಾನೆಯನ್ನೇ ಲೂಟಿ ತಾನು ಶುಧ್ಧಹಸ್ತನೆಂದು ಸಾರುತ್ತ ತಿರುಗುವ ತಮ್ಮ ಮಂತ್ರಿಗಳ ದಂಡು ಇನ್ನೊಂದೆಡೆ. ರಾಷ್ಟ್ರದ ಸಂಪತ್ತನ್ನು ಬರಿದಾಗಿಸಿ ವಿದೇಶದಲ್ಲಿ ತಮ್ಮ ಖಾತೆಗಳಲ್ಲಿ ಜಮೆ ಮಾಡಿಕೊಂಡಿರುವ ದೇಶ್ದ್ರೋಹಿಗಳು ನಮ್ಮನಾಳುವುದು ನಮ್ಮ ದೇಶದ ದುರ್ದೈವ.
ಅದೊಂದು ದಿನ ಪ್ರಧಾನ ಮಂತ್ರಿ ಶಾಸ್ತ್ರಿ ಅವರು ಬಳಸುತ್ತಿದ್ದ ವಾಹನವನ್ನು ಅವರ ಮಗ ಸುನಿಲ್ ಶಾಸ್ತ್ರಿ ವೈಯ್ಯಕ್ತಿಕ ಕೆಲಸಕ್ಕೆ ಉಪಯೋಗಿಸಿದ್ದು ಅವರ ಗಮನಕ್ಕೆ ಬಂದಾಗ ವಾಹನದ ಚಾಲಕನನ್ನು ಕರೆದು ವಾಹನ ಕ್ರಮಿಸಿದ ವಿವರವನ್ನು ಪಡೆದ ಶಾಸ್ತ್ರೀಜಿ ಅವರು ಅದರ ವೆಚ್ಚವನ್ನು ಸರ್ಕಾರಕ್ಕೆ ಪಾವತಿಸಿದರು!. ಇವರು ಬಹುಶಃ ಭಾರತ ಕಂಡ ಪ್ರಧಾನಿಯಾದ ಅತ್ಯಂತ ಪ್ರಾಮಾಣಿಕ ಜೀವಿ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಇವರ ಸ್ವಾಭಿಮಾನ್, ದೇಶಾಭಿಮಾನ ಕೂಡ ತಲೆದೂಗುವಂತದ್ದು.
ಇಂಥಹ ಪ್ರಾಮಾಣಿಕ ನಾಯಕತ್ವದ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ಜೈ ಹಿಂದ್. ಜೈ ಜವಾನ್, ಜೈ ಕಿಸಾನ್....









ಗಾಂಧೀಜಿ ಹತ್ಯೆಯ ರಹಸ್ಯ ...